ರಾಜ್ಯ ಘೋಷಕರು ವರದಿ ಮಾಡುತ್ತಾರೆ
ತೊಂದರೆಯುಕ್ತ ಕಾಲದಲ್ಲಿ ಸಾರುವುದು
“ಕಡೆಯ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು ಇರುವವು” ಎಂದು ಅಪೊಸ್ತಲ ಪೌಲನು ಮುಂತಿಳಿಸಿದನು. (2 ತಿಮೊಥೆಯ 3:1, NW) ಆ ಮಾತುಗಳು ಎಷ್ಟು ನಿಷ್ಕೃಷ್ಟವಾಗಿ ಪರಿಣಮಿಸಿವೆ! ಮಧ್ಯ ಅಮೆರಿಕದ ಎಲ್ ಸಾಲ್ವಡೋರಿನ ಜನರು ಈ ಕಟು ನಿಜತ್ವವನ್ನು ಬಹು ಸಮಯದಿಂದ ಅನುಭವಿಸಿದ್ದಾರೆ. ಒಂದು ದಶಕಕ್ಕಿಂತಲೂ ಹೆಚ್ಚು ಸಮಯಕ್ಕೆ, ದೇಶವು ಅನೇಕ ಸಾವಿರಾರು ಜನರಿಗೆ ಸಂಕಟ ಮತ್ತು ಮರಣವನ್ನು ತಂದಂತಹ ಒಂದು ಅಂತರ್ಯುದ್ಧದಲ್ಲಿ ಮುಳುಗಿಹೋಗಿತ್ತು. ಈಗ ಯುದ್ಧವು ನಿಂತಿದೆ, ಆದರೆ ದುರವಸ್ಥೆಯು ಹಾಗೇ ಉಳಿದಿದೆ. ಯುದ್ಧದ ನಂತರ ಪಾತಕವು ಪ್ರಚಂಡವಾಗಿ ಏರಿದೆ. ಒಬ್ಬ ಸ್ಥಳೀಯ ಟೆಲಿವಿಷನ್ ವ್ಯಾಖ್ಯಾನಗಾರನು ಇತ್ತೀಚೆಗೆ ಹೇಳಿದ್ದು: “ಇಂದು ಹಿಂಸೆ ಮತ್ತು ಕಳ್ಳತನವು ದಿನನಿತ್ಯದ ಒಂದು ಘಟನೆಯಾಗಿದೆ.”
ಈ ಪಾತಕದ ಅಲೆಯಿಂದ ಯೆಹೋವನ ಸಾಕ್ಷಿಗಳು ತಪ್ಪಿಸಲ್ಪಟ್ಟಿಲ್ಲ. ಅನೇಕ ರಾಜ್ಯ ಸಭಾಗೃಹಗಳಲ್ಲಿ ಕನ್ನಗಳ್ಳರು ಒಳನುಗ್ಗಿ ಧ್ವನಿ ಉಪಕರಣಗಳನ್ನು ಕದ್ದುಕೊಂಡು ಹೋಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಕ್ರೈಸ್ತ ಕೂಟಗಳು ನಡೆಯುತ್ತಿದ್ದಾಗ, ಸಶಸ್ತ್ರ ಯುವಕರ ತಂಡಗಳು ರಾಜ್ಯ ಸಭಾಗೃಹಗಳೊಳಗೆ ನುಗ್ಗಿ, ಉಪಸ್ಥಿತರಿದ್ದವರಿಂದ ಹಣ, ಗಡಿಯಾರಗಳು ಮತ್ತು ಇತರ ಅಮೂಲ್ಯವಸ್ತುಗಳನ್ನು ಕದ್ದಿದ್ದಾರೆ. ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿರುವಾಗ, ಅನೇಕ ಸಾಕ್ಷಿಗಳು ಕಳ್ಳರಿಂದ ಕೊಲ್ಲಲ್ಪಟ್ಟಿದ್ದಾರೆ.
ಈ ಎಲ್ಲಾ ಅಡಚಣೆಗಳ ಹೊರತೂ, ಎಲ್ ಸಾಲ್ವಡೋರ್ನಲ್ಲಿರುವ ಯೆಹೋವನ ಸಾಕ್ಷಿಗಳು ಸುವಾರ್ತೆಯನ್ನು ಸಾರುವದರಲ್ಲಿ ಕಠಿನವಾಗಿ ಕೆಲಸ ಮಾಡುತ್ತಾ ಮುಂದುವರಿಯುತ್ತಿದ್ದಾರೆ. “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು” ಎಂಬ ಶಾಸ್ತ್ರೀಯ ಆಜೆಗ್ಞೆ ವಿಧೇಯತೆಯಲ್ಲಿ ಅವರು ಇದನ್ನು ಮಾಡುತ್ತಾರೆ. (ಮಾರ್ಕ 13:10) ಬೈಬಲು ನೀಡುತ್ತಿರುವಂತಹ ರಾಜ್ಯ ನಿರೀಕ್ಷೆಗಾಗಿ ಹಾತೊರೆಯುವ ಇನ್ನೂ ಅನೇಕ ಮಂದಿ ಈ ದೇಶದಲ್ಲಿದ್ದಾರೆ, ಮತ್ತು ಅವರಲ್ಲಿ ಪ್ರತಿಯೊಬ್ಬರನ್ನು ತಲಪಲು ಸಾಕ್ಷಿಗಳು ಪ್ರಯತ್ನಿಸುತ್ತಿದ್ದಾರೆ. ಅನೌಪಚಾರಿಕ ಸಾಕ್ಷಿಯು, ಸಾರುವಿಕೆಯ ಒಂದು ಪರಿಣಾಮಕಾರಿಯಾದ ವಿಧಾನವಾಗಿ ಪರಿಣಮಿಸುತ್ತಿದೆ.
ಒಂದು ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾಗ, ಒಬ್ಬ ಸಾಕ್ಷಿಯು ಬೈಬಲಿನಲ್ಲಿ ಕಂಡುಕೊಳ್ಳಬಹುದಾದ ಭವಿಷ್ಯತ್ತಿನ ಕುರಿತಾದ ದೇವರ ವಾಗ್ದಾನಗಳ ಕುರಿತಾಗಿ ಇತರ ರೋಗಿಗಳೊಂದಿಗೆ ಮಾತಾಡಲು ಪ್ರತಿಯೊಂದು ಅವಕಾಶದ ಉಪಯೋಗವನ್ನು ಮಾಡುತ್ತಿದ್ದನು. ಗಂಭೀರವಾಗಿ ಅಸ್ವಸ್ಥನಾಗಿದ್ದ ಒಬ್ಬ ರೋಗಿಯು ದುಃಖದಿಂದ ಪ್ರಲಾಪಿಸಿದ್ದು: “ಬೇಗನೇ ನಾನು ಸಾಯಲಿದ್ದೇನೆ!” ಆದರೆ ಆ ರೋಗಿಯ ವಿಷಣ್ಣ ಹೊರನೋಟವು, ದೇವರ ರಾಜ್ಯದ ಸುವಾರ್ತೆಯನ್ನು ಸಾರುವದರಿಂದ ಸಾಕ್ಷಿಯನ್ನು ನಿರುತ್ಸಾಹಗೊಳಿಸಲಿಲ್ಲ. ಬದಲಾಗಿ, ಅವನು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕದಿಂದ ಆ ಮನುಷ್ಯನಿಗಾಗಿ ಗಟ್ಟಿಯಾಗಿ ಓದಿದನು. ಕೆಲವು ದಿನಗಳ ನಂತರ, ಆ ಮನುಷ್ಯನು ಮೃತ್ಯುಶಯ್ಯೆಯಲ್ಲಿದ್ದಾನೆಂದು ದುಃಖದಿಂದ ಯೋಚಿಸುತ್ತಾ, ಸಾಕ್ಷಿಯು ಆಸ್ಪತ್ರೆಯನ್ನು ಬಿಟ್ಟುಹೋದನು.
ನಾಲ್ಕು ವರ್ಷಗಳ ನಂತರ ಸಾಕ್ಷಿಯು ಇನ್ನೊಂದು ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಬೇಕಿತ್ತು. ಅವನು ಅಲ್ಲಿದ್ದಾಗ, ಒಬ್ಬ ರೋಗಿಯು ಅವನನ್ನು ಸಮೀಪಿಸಿ, ಹೇಳಿದ್ದು: “ನಿಮಗೆ ನನ್ನ ನೆನಪು ಇದೆಯೋ?” ನಾಲ್ಕು ವರ್ಷಗಳ ಹಿಂದೆ, ಸಾಯುತ್ತಿದ್ದಾನೆಂದು ಎಣಿಸಲ್ಪಟ್ಟ ಮನುಷ್ಯನು ಅವನಾಗಿದ್ದನು! ಆ ಮನುಷ್ಯನು ಅವನನ್ನು ಅಲಿಂಗಿಸಿ “ಈಗ ನಾನೂ ಒಬ್ಬ ಯೆಹೋವನ ಸಾಕ್ಷಿಯಾಗಿದ್ದೇನೆ” ಎಂದು ಕೂಡಿಸಿದಾಗ ಅದು ಎಂತಹ ಒಂದು ಆನಂದಕರ ಆಶ್ಚರ್ಯವಾಗಿತ್ತು! ಭವಿಷ್ಯತ್ತಿನ ಕುರಿತಾದ ಬೈಬಲಿನ ನಿರೀಕ್ಷೆಯನ್ನು ಆ ಮನುಷ್ಯನು ಸ್ವೀಕರಿಸಿದ್ದನು, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸಿದನು, ಮತ್ತು ಯೆಹೋವನಿಗೆ ತನ್ನ ಜೀವಿತವನ್ನು ಸಮರ್ಪಿಸಿದ್ದನು. ಅವನು ಕೇವಲ ಒಬ್ಬ ಸಾಕ್ಷಿಯಾಗಿದ್ದನು ಮಾತ್ರವಲ್ಲ ಸುಮಾರು ಎರಡು ವರ್ಷಗಳಿಂದ ಒಬ್ಬ ಕ್ರಮದ ಪಯನೀಯರನಾಗಿ ಪೂರ್ಣ ಸಮಯದ ಸೇವೆಯಲ್ಲಿ ಭಾಗವಹಿಸುತ್ತಿದ್ದನು.
ಈ ವಿದ್ಯಮಾನದಲ್ಲಿ, ಅನೌಪಚಾರಿಕ ಸನ್ನಿವೇಶದಲ್ಲಿ ಬಿತ್ತಲ್ಪಟ್ಟ ಸತ್ಯದ ಬೀಜಗಳು ಒಂದು ಪ್ರತಿಕ್ರಿಯೆ ತೋರಿಸುವ ಹೃದಯವನ್ನು ಮುಟ್ಟಿದವ್ದು. ಸತ್ಯದ ಜ್ಞಾನಕ್ಕೆ ಬರಲು ಜನರಿಗೆ ಸಹಾಯ ಮಾಡುವ ಈ ಸುಯೋಗವು, ಈ “ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳ” ಹೊರತೂ ತಮ್ಮ ಸಾರುವಿಕೆಯ ಕೆಲಸದೊಂದಿಗೆ ಮುಂದುವರಿಯಲು ಸತ್ಯ ಕ್ರೈಸ್ತರನ್ನು ಮುಂದಕ್ಕೆ ನಡೆಸುತ್ತದೆ.