ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 12-16
ಇಸ್ರಾಯೇಲ್ಯರು ಯೆಹೋವನನ್ನು ಮರೆತುಬಿಟ್ಟರು
ಯೆಹೋವನು ಯೆರೆಮೀಯನಿಗೆ ಕೊಟ್ಟ ಕಠಿಣ ನೇಮಕದಿಂದ, ಯೆಹೂದ ಮತ್ತು ಯೆರೂಸಲೇಮಿನ ದುರಂಹಕಾರವನ್ನು ನಾಶಮಾಡಲು ಯೆಹೋವನಿಗಿದ್ದ ದೃಢತೆ ನಮಗೆ ಗೊತ್ತಾಗುತ್ತದೆ
ಯೆರೆಮೀಯನು ನಾರಿನ ನಡುಕಟ್ಟನ್ನು ಕೊಂಡುಕೊಂಡನು
ಸೊಂಟಕ್ಕೆ ಬಿಗಿದುಕೊಂಡಿದ್ದ ನಡುಕಟ್ಟು ಯೆಹೋವನ ಮತ್ತು ಇಸ್ರಾಯೇಲ್ ಜನಾಂಗದ ಮಧ್ಯೆ ಇದ್ದ ಆಪ್ತ ಸಂಬಂಧವನ್ನು ಸೂಚಿಸಿತು
ಯೆರೆಮೀಯನು ನಡುಕಟ್ಟನ್ನು ಯೂಫ್ರೇಟೀಸ್ ನದಿಗೆ ತೆಗೆದುಕೊಂಡು ಹೋದನು
ಆ ನಡುಕಟ್ಟನ್ನು ಬಂಡೆಯ ಸಂದಿಯೊಳಗೆ ಬಚ್ಚಿಟ್ಟು ಯೆರೂಸಲೇಮಿಗೆ ಹಿಂದಿರುಗಿದನು
ನಡುಕಟ್ಟನ್ನು ಮತ್ತೆ ತರಲು ಯೆರೆಮೀಯನು ಯೂಫ್ರೇಟೀಸ್ ನದಿಗೆ ಹೋದನು
ನಡುಕಟ್ಟು ಹಾಳಾಗಿಹೋಗಿತ್ತು
ಯೆರೆಮೀಯನು ತನ್ನ ಈ ನೇಮಕವನ್ನು ಪೂರೈಸಿದ ನಂತರ ಯೆಹೋವನು ಅವನಿಗೆ ವಿಷಯವನ್ನು ವಿವರಿಸಿದನು
ಅಷ್ಟೇನು ದೊಡ್ಡದಲ್ಲದ ಈ ಕೆಲಸಕ್ಕೆ ಯೆರೆಮೀಯನು ತೋರಿಸಿದ ವಿಧೇಯತೆಯು ಒಳ್ಳೇ ಹೃದಯದ ಜನರನ್ನು ತಲುಪಲು ಯೆಹೋವನು ಮಾಡಿದ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸಿತು