ನೆನಪಿಸಬೇಕಾದ ಒಂದು ಘಟನೆ!
ಅದು ನೈಸಾನ್ 14, ಸಾ.ಶ. 33 ನೆಯ ವರ್ಷ.
ಯೇಸು ದ್ರಾಕ್ಷಾರಸ ಪಾತ್ರೆಯನ್ನು ಮತ್ತು ಹುಳಿಯಿಲ್ಲದ ರೊಟ್ಟಿಯನ್ನು ತನ್ನ ಅಪೋಸ್ತಲರಿಗೆ ಹಂಚುತ್ತಿದ್ದನು. ಅವನ ಆಜ್ನೆ: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.”—ಲೂಕ 22:19.
ಆದುದರಿಂದ ಯೆಹೋವನ ಸಾಕ್ಷಿಗಳು ವರ್ಷಕ್ಕೊಮ್ಮೆ ಆ ಹೇಳಿಕೆಯನ್ನು ಮಾಡಿದ ರಾತ್ರಿಯಲ್ಲಿ ಅವನು ಆಜ್ನೆಯಿತ್ತ ಪ್ರಕಾರ ಯೇಸುವಿನ ಮರಣದ ಜ್ಞಾಪಕಾಚರಣೆಯನ್ನು ಮಾಡಲು ಲೋಕವ್ಯಾಪಕವಾಗಿ ಒಟ್ಟುಸೇರುತ್ತಾರೆ. ಈ ವರ್ಷ ನೈಸಾನ್ 14, ಎಪ್ರಿಲ್ 10 ರ ಮಂಗಳವಾರ ಸೂರ್ಯಾಸ್ತಮಾನದಿಂದ ಆರಂಭಿಸುತ್ತದೆ. ಆ ಮಂಗಳವಾರ ಸಾಯಂಕಾಲ ಈ ಜ್ಞಾಪಕಾಚರಣೆಯ ಕೂಟದಲ್ಲಿ ನಮ್ಮೊಂದಿಗೆ ಜತೆಗೂಡಿ ಬರುವಂತೆ ನಿಮ್ಮನ್ನು ಸಾದರದಿಂದ ಆಮಂತ್ರಿಸಲಾಗಿದೆ. ಸ್ಥಳೀಕವಾಗಿ ಯೆಹೋವನ ಸಾಕ್ಷಿಗಳೊಂದಿಗೆ ಸರಿಯಾದ. ಕೂಟದ ಸ್ಥಳ ಮತ್ತು ಸಮಯಕ್ಕಾಗಿ ಕೇಳಿರಿ.