ಪಾದಟಿಪ್ಪಣಿ
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಇನ್ಸೈಟ್ ಆನ್ ದ ಸ್ರಿಪ್ಚರ್ಸ್ ವಿವರಿಸುವುದು: “ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವಂತೆ, ‘ದೋಷಪರಿಹಾರದ’ ಮೂಲ ಅರ್ಥ, ‘ಮುಚ್ಚು’ ಅಥವಾ ‘ವಿನಿಮಯಮಾಡು’ ಎಂದಾಗಿದೆ. ಒಂದು ವಸ್ತುವಿನ ವಿನಿಮಯದಲ್ಲಿ ಕೊಡಲಾಗುವ ಅಥವಾ ಅದನ್ನು ‘ಮುಚ್ಚಲಿಕ್ಕಾಗಿ’ ಕೊಡಲಾಗುವ ವಸ್ತು, ಅದರ ಪ್ರತಿರೂಪವಾಗಿರಬೇಕು. . . . ಆದಾಮನು ಏನನ್ನು ಕಳಕೊಂಡನೊ ಅದಕ್ಕೆ ಸರಿಯಾದ ಪ್ರಾಯಶ್ಚಿತ್ತವನ್ನು ಮಾಡಲಿಕ್ಕಾಗಿ, ಕರಾರುವಾಕ್ಕಾಗಿ ಒಂದು ಪರಿಪೂರ್ಣ ಮಾನವ ಜೀವದ ಮೌಲ್ಯವುಳ್ಳ ದೋಷಪರಿಹಾರಕ ಯಜ್ಞವು ಕೊಡಲ್ಪಡಬೇಕಾಗಿತ್ತು.”