ನಮ್ಮ ಕ್ರೈಸ್ತ ಜೀವನ
ನಿಷ್ಕ್ರಿಯರನ್ನು ಉತ್ತೇಜಿಸಿ
ಏಪ್ರಿಲ್ 11, ಮಂಗಳವಾರದಂದು ಕ್ರಿಸ್ತನ ಮರಣದ ಸ್ಮರಣೆಗೆ ಅನೇಕ ನಿಷ್ಕ್ರಿಯರು ಹಾಜರಾಗಲಿದ್ದಾರೆ. ಅವರು ಜೀವದ ಓಟವನ್ನು ಆರಂಭಿಸಿರುವುದಾದರೂ ಅನೇಕ ಕಾರಣಗಳಿಗಾಗಿ ತಮ್ಮ ಓಟವನ್ನು ನಿಧಾನಿಸಿದ್ದಾರೆ. ಆ ಕಾರಣಗಳಲ್ಲಿ ಕೆಲವನ್ನು ಮರಳಿ ಬನ್ನಿ ಯೆಹೋವನ ಬಳಿ ಕಿರುಹೊತ್ತಗೆಯಲ್ಲಿ ತಿಳಿಸಲಾಗಿದೆ. (ಇಬ್ರಿ 12:1) ಯೆಹೋವನು ನಿಷ್ಕ್ರಿಯರನ್ನು ತುಂಬಾ ಅಮೂಲ್ಯವೆಂದು ಎಣಿಸುತ್ತಾನೆ, ಕಾರಣ ಅವರನ್ನೂ ತನ್ನ ಮಗನ ರಕ್ತದಿಂದ ಕೊಂಡುಕೊಂಡಿದ್ದಾನೆ. (ಅಕಾ 20:28; 1ಪೇತ್ರ 1:18, 19) ಹಾಗಾದರೆ ನಿಷ್ಕ್ರಿಯರು ಸಭೆಗೆ ಮರಳಿ ಬರುವಂತೆ ನಾವು ಹೇಗೆ ಸಹಾಯ ಮಾಡಬಹುದು?
ಒಬ್ಬ ಕುರುಬ ತನ್ನ ಹಿಂಡಿನಿಂದ ಕಳೆದು ಹೋದ ಕುರಿಯನ್ನು ಹುಡುಕಲು ಎಷ್ಟು ಪ್ರಯತ್ನಿಸುತ್ತಾನೋ ಹಿರಿಯರು ಸಹ ನಿಷ್ಕ್ರಿಯರನ್ನು ಹುಡುಕಿ ಅವರಿಗೆ ಸಹಾಯ ಮಾಡಲು ಅಷ್ಟೇ ಪ್ರಯತ್ನಿಸುತ್ತಾರೆ. (ಲೂಕ 15:4-7) ಇದು ತಾನೇ ಯೆಹೋವ ದೇವರು ಅವರನ್ನು ಎಷ್ಟು ಪ್ರೀತಿಸುತ್ತಾನೆ ಅಂತ ತೋರಿಸುತ್ತದೆ. (ಯೆರೆ 23:3, 4) ಅವರನ್ನು ಹಿರಿಯರು ಮಾತ್ರವಲ್ಲ, ನಾವು ಕೂಡ ಪ್ರೋತ್ಸಾಹಿಸಬಹುದು. ಅವರಿಗೆ ನಾವು ದಯೆ ಮತ್ತು ಅನುಕಂಪವನ್ನು ತೋರಿಸುವಾಗ ಯೆಹೋವನಿಗೆ ತುಂಬಾ ಸಂತೋಷವಾಗುತ್ತದೆ ಮತ್ತು ಒಳ್ಳೇ ಫಲಿತಾಂಶಗಳು ಸಿಗುತ್ತವೆ. (ಜ್ಞಾನೋ 19:17; ಅಕಾ 20:35) ಹಾಗಾಗಿ ಅಂಥವರು ಯಾರಾದರೂ ಇದ್ದಾರಾ ಅಂತ ಯೋಚಿಸಿ. ಅವರಿಗೆ ತಕ್ಷಣ ಸಹಾಯ ಮಾಡಿ.
ನಿಷ್ಕ್ರಿಯರನ್ನು ಉತ್ತೇಜಿಸಿ ಎಂಬ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನು ಪರಿಗಣಿಸಿ:
ತನಗೆ ಪರಿಚಯ ಇಲ್ಲದ ಒಬ್ಬ ಸಾಕ್ಷಿಯನ್ನು ಭೇಟಿಯಾದ ಮೇಲೆ ಆ್ಯಬೀ ಏನು ಮಾಡಿದಳು?
ನಿಷ್ಕ್ರಿಯರಿಗೆ ಸಹಾಯ ಮಾಡಲು ಯೋಚಿಸುತ್ತಿದ್ದರೆ ಅದರ ಬಗ್ಗೆ ಹಿರಿಯರ ಹತ್ತಿರ ಏಕೆ ಮಾತಾಡಬೇಕು?
ಎರಡನೇ ಬಾರಿ ಲೋರಾಳನ್ನು ಭೇಟಿಯಾಗಲು ಆ್ಯಬೀ ಏನೆಲ್ಲಾ ತಯಾರಿ ಮಾಡಿದಳು?
ಲೋರಾಳನ್ನು ಉತ್ತೇಜಿಸುವಾಗ ಆ್ಯಬೀ ಹೇಗೆ ಪಟ್ಟುಹಿಡಿದಳು ಮತ್ತು ಪ್ರೀತಿ, ತಾಳ್ಮೆ ತೋರಿಸಿದಳು?
ಲೂಕ 15:8-10 ರಲ್ಲಿರುವ ಯೇಸುವಿನ ದೃಷ್ಟಾಂತದಿಂದ ನಾವು ಯಾವ ಪಾಠ ಕಲಿಯಬಹುದು?
ಲೋರಾಳಿಗೆ ಸಹಾಯ ಮಾಡಲು ಹಾಕಿದ ಪ್ರಯತ್ನಕ್ಕೆ ಯಾವ ಪ್ರತಿಫಲ ಸಿಕ್ಕಿತು?