ಬೈಬಲಿನಲ್ಲಿರುವ ರತ್ನಗಳು | ಲೂಕ 8-9
ಯೇಸುವಿನ ಹಿಂಬಾಲಕನಾಗಲು ಏನು ಮಾಡಬೇಕು?
ಒಬ್ಬ ರೈತನು ನೇರವಾಗಿ ಉಳಬೇಕಾದರೆ ಹಿಂದೆ ತಿರುಗಿ ನೋಡಬಾರದು. ಅದೇ ರೀತಿ, ಒಬ್ಬ ಕ್ರೈಸ್ತನು ಹಿಂದೆ ಬಿಟ್ಟುಬಂದ ವಿಷಯಗಳನ್ನು ನೋಡಿ ಅಪಕರ್ಷಿತನಾಗಬಾರದು.—ಫಿಲಿ 3:13.
ನಮಗೆ ಕಷ್ಟಗಳು ಬಂದಾಗ, ‘ಮುಂಚೆ ಜೀವನ ಎಷ್ಟು ಚೆನ್ನಾಗಿತ್ತು’ ಎಂಬ ಯೋಚನೆ ಬರಬಹುದು. ಬಹುಶಃ ಸತ್ಯಕ್ಕೆ ಬರುವ ಮುಂಚೆ ಇದ್ದ ಜೀವನದ ಬಗ್ಗೆ ನಾವು ಯೋಚಿಸಬಹುದು. ಈ ಯೋಚನೆ ಬಂದಾಗ ನಾವು ಹಿಂದೆ ಅನುಭವಿಸುತ್ತಿದ್ದ ಸಮಸ್ಯೆಗಳು ನಮಗೆ ದೊಡ್ಡದಾಗಿ ಕಾಣಲಿಕ್ಕಿಲ್ಲ, ಆದರೆ ತುಂಬಾ ಸಂತೋಷವಾಗಿದ್ದಂತೆ ಅನಿಸಬಹುದು. ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟುಬಂದ ಮೇಲೆ ಇದನ್ನೇ ಮಾಡಿದರು. (ಅರ 11:5, 6) ಈ ರೀತಿ ಯೋಚಿಸುತ್ತಾ ಇದ್ದರೆ ನಾವು ನಮ್ಮ ಹಿಂದಿನ ಜೀವನ ರೀತಿಗೆ ಹಿಂದಿರುಗುವ ಸಾಧ್ಯತೆ ಇದೆ. ಅದರ ಬದಲು ಈಗ ನಮಗಿರುವ ಸುಯೋಗಗಳ ಬಗ್ಗೆ ಮತ್ತು ಮುಂದೆ ದೇವರ ರಾಜ್ಯದಲ್ಲಿ ಸಿಗಲಿರುವ ಆಶೀರ್ವಾದಗಳ ಬಗ್ಗೆ ಯೋಚಿಸುವುದು ಉತ್ತಮ ಅಲ್ವಾ?—2ಕೊರಿಂ 4:16-18.