ಬೈಬಲಿನಲ್ಲಿರುವ ರತ್ನಗಳು | ಮಾರ್ಕ 13-14
ಮನುಷ್ಯನ ಭಯಕ್ಕೆ ಮಣಿಯಬೇಡಿ
ಅಪೊಸ್ತಲರು ಒತ್ತಡಕ್ಕೆ ಮಣಿಯಲು ಕಾರಣವೇನು?
ಅವರಲ್ಲಿ ಅತಿಯಾದ ಆತ್ಮವಿಶ್ವಾಸ ಇತ್ತು. ಪೇತ್ರನು ಬೇರೆಲ್ಲ ಅಪೊಸ್ತಲರಿಗಿಂತ ಹೆಚ್ಚು ನಿಷ್ಠೆ ತೋರಿಸುವನೆಂದು ಸಹ ಹೇಳಿದನು
ಅವರು ಎಚ್ಚರವಾಗಿದ್ದು ಪ್ರಾರ್ಥಿಸಲಿಲ್ಲ
ಯೇಸುವಿನ ಪುನರುತ್ಥಾನದ ನಂತರ, ಮನುಷ್ಯನ ಭಯಕ್ಕೆ ಮಣಿಯದಿರಲು ಮತ್ತು ವಿರೋಧದ ಮಧ್ಯೆಯೂ ಸಾರುತ್ತಾ ಇರಲು ಪಶ್ಚಾತ್ತಾಪಪಟ್ಟಿದ್ದ ಅಪೊಸ್ತಲರಿಗೆ ಯಾವುದು ಸಹಾಯ ಮಾಡಿತು?
ಯೇಸು ಕೊಟ್ಟ ಎಚ್ಚರಿಕೆಗಳನ್ನು ಅವರು ಮನಸ್ಸಿಗೆ ತೆಗೆದುಕೊಂಡಿದ್ದರಿಂದ ವಿರೋಧ, ಹಿಂಸೆ ಬಂದಾಗ ಅದನ್ನು ಎದುರಿಸಲು ಸಿದ್ಧರಿದ್ದರು
ಅವರು ಯೆಹೋವನ ಮೇಲೆ ಅವಲಂಬಿಸಿಕೊಂಡು ಪ್ರಾರ್ಥಿಸಿದರು.—ಅಕಾ 4:24, 29
ಯಾವ ಸನ್ನಿವೇಶಗಳಲ್ಲಿ ನಾವು ಧೈರ್ಯ ತೋರಿಸಬೇಕಾಗಿ ಬರುತ್ತದೆ?