ಪ್ರಕಟನೆಗಳು
◼ ಸೆಪ್ಟೆಂಬರ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್) ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಪುನರ್ಭೇಟಿಗಳನ್ನು ಮಾಡುವಾಗ ಆಸಕ್ತಿಯು ಕಂಡುಬರುವಲ್ಲಿ, ಚಂದಾಗಳನ್ನು ನೀಡಬಹುದು. ನವೆಂಬರ್: ಈ ತಿಂಗಳಿನಿಂದ ಆರಂಭಿಸಿ ರಾಜ್ಯ ವಾರ್ತೆ ನಂ. 36ನ್ನು ವಿತರಿಸಲಾಗುವುದು. ಸಭೆಗಳು ತಮ್ಮ ಟೆರಿಟೊರಿಯಲ್ಲಿರುವ ಪ್ರತಿಯೊಂದು ಮನೆಯಲ್ಲಿ ರಾಜ್ಯ ವಾರ್ತೆ ನಂ. 36ನ್ನು ನೀಡಿದ ಬಳಿಕ, ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕವನ್ನು ನೀಡಬಹುದು. ಈ ಬ್ರೋಷರ್ ಅಥವಾ ಪುಸ್ತಕವು ಜನರ ಬಳಿ ಈಗಾಗಲೇ ಇರುವುದಾದರೆ, ಸದಾ ಜೀವಿಸಬಲ್ಲಿರಿ ಅಥವಾ ಸೃಷ್ಟಿ (ಇಂಗ್ಲಿಷ್) ಪುಸ್ತಕವನ್ನು ಕೊಡಬಹುದು. ಡಿಸೆಂಬರ್: ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನೊಂದಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕ.
◼ ಸಭೆಯಲ್ಲಿ ಪುನಸ್ಥಾಪಿಸಲ್ಪಡಲು ಇಷ್ಟವಿರಬಹುದಾದ ಯಾವುದೇ ಬಹಿಷ್ಕೃತರು ಅಥವಾ ಬೇರ್ಪಡಿಸಿಕೊಂಡ ವ್ಯಕ್ತಿಗಳ ಕುರಿತಾಗಿ, 1992 ಫೆಬ್ರವರಿ 1ರ ಕಾವಲಿನಬುರುಜು ಪತ್ರಿಕೆಯ 20-1ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಸೂಚನೆಗಳನ್ನು ಅನುಸರಿಸುವಂತೆ ಹಿರಿಯರನ್ನು ಜ್ಞಾಪಿಸಲಾಗುತ್ತದೆ.
◼ ಒಂದು ಸಭೆಯೊಂದಿಗೆ ಸಹವಾಸಿಸುವವರು ತಮ್ಮ ವೈಯಕ್ತಿಕ ಚಂದಾಗಳನ್ನು ಸೇರಿಸಿ, ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳಿಗಾಗಿರುವ ಎಲ್ಲ ಹೊಸ ಹಾಗೂ ನವೀಕರಣ ಚಂದಾಗಳನ್ನು ಸಭೆಯ ಮುಖಾಂತರ ಕಳುಹಿಸಬೇಕು.
◼ ಸಾಹಿತ್ಯಕ್ಕಾಗಿ ಪ್ರಚಾರಕರ ವೈಯಕ್ತಿಕ ವಿನಂತಿಗಳನ್ನು ಸೊಸೈಟಿಯು ಸ್ವೀಕರಿಸುವುದಿಲ್ಲ. ಸಾಹಿತ್ಯಕ್ಕಾಗಿ ಸಭೆಯ ಮಾಸಿಕ ವಿನಂತಿಯನ್ನು ಸೊಸೈಟಿಗೆ ಕಳುಹಿಸುವ ಮುಂಚೆ, ಪ್ರತಿ ತಿಂಗಳು ಒಂದು ಪ್ರಕಟನೆಯನ್ನು ಮಾಡುವಂತೆ ಅಧ್ಯಕ್ಷ ಮೇಲ್ವಿಚಾರಕನು ಏರ್ಪಡಿಸಬೇಕು. ಇದು, ವೈಯಕ್ತಿಕ ಸಾಹಿತ್ಯ ಐಟಮ್ಗಳನ್ನು ಪಡೆದುಕೊಳ್ಳಲು ಆಸಕ್ತರಿರುವವರೆಲ್ಲರೂ, ಸಾಹಿತ್ಯವನ್ನು ನಿರ್ವಹಿಸುವ ಸಹೋದರನಿಗೆ ಹೇಳುವಂತೆ ಸಾಧ್ಯಮಾಡುತ್ತದೆ. ಯಾವ ಪ್ರಕಾಶನಗಳು ವಿಶೇಷ ವಿನಂತಿಯ ಐಟಮ್ಗಳಾಗಿವೆ ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿರಿ.
◼ ಅಧ್ಯಕ್ಷ ಮೇಲ್ವಿಚಾರಕರು ಅಥವಾ ಅವರಿಂದ ನೇಮಿಸಲ್ಪಟ್ಟವರು ಸಭೆಯ ಅಕೌಂಟ್ಸನ್ನು ಸೆಪ್ಟೆಂಬರ್ 1ರಂದು ಅಥವಾ ಆದಷ್ಟು ಬೇಗನೆ ಆಡಿಟ್ ಮಾಡಬೇಕು. ಇದನ್ನು ಮಾಡಿದ ಮೇಲೆ, ಮುಂದಿನ ಅಕೌಂಟ್ಸ್ ವರದಿಯನ್ನು ಓದಿದ ನಂತರ ಸಭೆಗೆ ಪ್ರಕಟನೆಯೊಂದನ್ನು ಮಾಡಿರಿ.
◼ ಈ ವರ್ಷ ಲೊನಾವ್ಲದಲ್ಲಿ ನಡೆಯಬೇಕಾಗಿದ್ದ, “ದೇವರ ವಾಕ್ಯದ ಪ್ರಕಾರ ನಡೆಯುವವರು” ಎಂಬ ಇಂಗ್ಲಿಷ್ ಭಾಷೆಯ ಜಿಲ್ಲಾ ಅಧಿವೇಶನದ ಸ್ಥಳ ಮತ್ತು ತಾರೀಖನ್ನು ಬದಲಾಯಿಸಲಾಗಿದೆ. ಅದು ಈಗ 2000, ನವೆಂಬರ್ 3-5ರಂದು ಮುಂಬಯಿಯಲ್ಲಿ ನಡೆಯಲಿದೆ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
WT ಪಬ್ಲಿಕೇಷನ್ಸ್ ಇಂಡೆಕ್ಸ್ 1999 —ಇಂಗ್ಲಿಷ್
◼ ಲಭ್ಯವಿರುವ ಹೊಸ ಕಾಂಪ್ಯಾಕ್ಟ್ ಡಿಸ್ಕ್ಗಳು:
ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ—ಕಾಂಪ್ಯಾಕ್ಟ್ ಡಿಸ್ಕ್ (ಎಂಟು ಡಿಸ್ಕ್ಗಳ ಸೆಟ್) —ಇಂಗ್ಲಿಷ್
◼ ಪುನಃ ಲಭ್ಯವಿರುವ ಪ್ರಕಾಶನಗಳು:
ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! —ಪಂಜಾಬಿ
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? —ಸಿಂಧಿ
ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! —ಮಲೆಯಾಳಂ, ತಮಿಳು