ಭಾಗ 14—ಪರಿಚಯ
ಆರಂಭದ ಕ್ರೈಸ್ತರು ಎಲ್ಲಾ ಕಡೆಗಳಲ್ಲೂ ದೇವರ ಆಳ್ವಿಕೆಯ ಸಿಹಿಸುದ್ದಿನ ಸಾರಿದರು. ಎಲ್ಲಿ ಸಾರಬೇಕು ಎಂದು ಯೇಸು ಅವರಿಗೆ ಮಾರ್ಗದರ್ಶಿಸಿದನು. ಅದ್ಭುತಕರವಾಗಿ ಜನರ ಸ್ವಂತ ಭಾಷೆಯಲ್ಲೇ ಕಲಿಸುವಂತೆ ಮಾಡಿದನು. ಕಡು ಹಿಂಸೆಯನ್ನು ಎದುರಿಸಲು ಯೆಹೋವನು ಅವರಿಗೆ ಧೈರ್ಯ, ಶಕ್ತಿ ಕೊಟ್ಟನು.
ಯೇಸು ಅಪೊಸ್ತಲ ಯೋಹಾನನಿಗೆ ಯೆಹೋವನ ಮಹಿಮೆಯ ಬಗ್ಗೆ ಒಂದು ದರ್ಶನ ತೋರಿಸಿದನು. ಇನ್ನೊಂದರಲ್ಲಿ, ಸ್ವರ್ಗದಲ್ಲಿರೋ ದೇವರ ಆಳ್ವಿಕೆ ಸೈತಾನನ ಮೇಲೆ ಜಯ ಸಾಧಿಸಿ ಅವನ ಆಳ್ವಿಕೆಯನ್ನು ಶಾಶ್ವತವಾಗಿ ತೆಗೆದುಹಾಕುವುದನ್ನು ಕಂಡನು. ಯೇಸು ರಾಜನಾಗಿ ಮತ್ತು 1,44,000 ಮಂದಿ ಸಹರಾಜರಾಗಿ ಆಳುವುದನ್ನೂ ನೋಡಿದನು. ಜೊತೆಗೆ, ಇಡೀ ಭೂಮಿ ಪರದೈಸಾಗಿ ಎಲ್ಲರೂ ಶಾಂತಿ ಐಕ್ಯತೆಯಿಂದ ಯೆಹೋವನನ್ನು ಆರಾಧಿಸುವುದನ್ನು ನೋಡಿದನು.