ಭಾಗ 3ರ ಪರಿಚಯ
ಜಲಪ್ರಳಯದ ನಂತರ ಬದುಕಿದವರಲ್ಲಿ ಕೆಲವರು ಮಾತ್ರ ಯೆಹೋವನನ್ನು ಆರಾಧಿಸಿದರು. ಅವರಲ್ಲಿ ಒಬ್ಬ ಅಬ್ರಹಾಮ. ಇವನು ಯೆಹೋವನ ಸ್ನೇಹಿತ ಎಂದೇ ಹೆಸರುವಾಸಿ. ಅಬ್ರಹಾಮನನ್ನು ಯಾಕೆ ಹೀಗೆ ಕರೆಯಲಾಗಿದೆ? ಯಾಕೆಂದರೆ ಯೆಹೋವನಿಗೆ ಅಬ್ರಹಾಮನ ಮೇಲೆ ಪ್ರೀತಿ ಇತ್ತು ಮತ್ತು ಅವನಿಗೆ ಸಹಾಯಮಾಡಲು ಇಷ್ಟಪಟ್ಟನು. ಈ ನಿಜಾಂಶವನ್ನು ನಿಮ್ಮ ಮಗು ಅರ್ಥಮಾಡಿಕೊಳ್ಳಲು ಸಹಾಯಮಾಡಿ. ಅಬ್ರಹಾಮ, ಲೋಟ, ಯಾಕೋಬ ಮತ್ತು ಇತರ ನಂಬಿಗಸ್ತ ಜನರ ಹಾಗೆ ನಿಮ್ಮ ಮಗು ಸಹ ಯೆಹೋವನ ಸಹಾಯ ಪಡೆಯಬಹುದು. ಆದ್ದರಿಂದ ಯೆಹೋವನು ಏನೇ ಮಾತು ಕೊಟ್ಟರೂ ಖಂಡಿತ ಅದನ್ನು ಉಳಿಸಿಕೊಳ್ಳುತ್ತಾನೆ ಎಂದು ಭರವಸೆ ಇಡಲು ಕಲಿಸಿ.